Total Pageviews

Thursday, August 17, 2017

ಪರಿಮಳಾಚಾರ್ಯ

ಶ್ರೀ ರಾಘವೇಂದ್ರರ ಬಗ್ಗೆ ನಾವು ತಿಳಿದದ್ದು ಬರೀ ಪವಾಡ ಪುರುಷರು ಅಥವಾ ಕಾಮಧೇನುಗಳು ಎಂದು. ಶ್ರೀ ರಾಘವೇಂದ್ರರನ್ನು ಪರಿಮಳಾಚಾರ್ಯರು ಎಂದು ಕೂಡ ಕರೆಯುತ್ತಾರೆ ಎಂದು ಎಷ್ಟೊಂದು ಬಾರಿ ಗೊತ್ತಿರುವುದಿಲ್ಲ ಅಥವಾ ಕೇಳಿದ್ದರೂ ಕೂಡ ಯಾಕೆ ಆ ಹೆಸರು ಬಂದಿತು ಎಂದು ಗೊತ್ತಿರುವುದಿಲ್ಲ.

ಶ್ರೀ ರಾಘವೇಂದ್ರರ ಸ್ವಾಮಿಗಳ ಬಗ್ಗೆ ನಮಗೆ ಹೆಚ್ಚಾಗಿ ಪರಿಚಯವಿರದ ಅಂಶ ಅವರು ಬರೆದ ಗ್ರಂಥಗಳು. ಶ್ರೀ ಗುರುರಾಘವೇಂದ್ರರು ಬರೆದ ಒಟ್ಟು ಗ್ರಂಥಗಳ ಸಂಖ್ಯೆ ೪೮ ಕ್ಕೂ ಹೆಚ್ಚು. ಅದರಲ್ಲಿ ಒಂದಾದರೂ ಕೂಡ ನಾವು ಪ್ರತಿ ಬಾರಿ ಮಠಕ್ಕೆ ಹೋದಾಗ ಸ್ಮರಿಸ ಬೇಡವೇ?   ಶ್ರೀ ರಾಘವೇಂದ್ರರು ಮಾಡಿದ ಗ್ರಂಥಗಳು ಆಚಾರ್ಯರ ಮಾಧ್ವರ ವೇದ ಸಮುದ್ರಕ್ಕೆ ಸೇರುವಂತ ಗಂಗಾ ನದಿ ಇದ್ದ ಹಾಗೆ. ಅವರ ಪ್ರತಿ ಮಾತಿನಲ್ಲಿ ವೇದಗಳಂತೆ ಭಗವಂತ ತುಂಬಿದ್ದಾನೆ.

ಶ್ರೀ ರಾಘವೇಂದ್ರರು  ಬರೆದ ಗ್ರಂಥಗಳನ್ನು ಐದು ವರ್ಗಗಳಾಗಿ ವಿಂಗಡಿಸಬಹುದು:
೧. ವೇದಗಳಿಗೆ ನೇರವಾಗಿ ಬರೆದ ವ್ಯಾಖಾನ (ಪುರುಷಸೂಕ್ತ, ಅಂಭೃಣಿ ಸೂಕ್ತ, ಹಿರಣ್ಯಗರ್ಭ ಸೂಕ್ತ, ಮಂತ್ರಾರ್ಥ ಮಂಜರಿ)
೨. ಆಚಾರ್ಯರು ವೇದಗಳಿಗೆ ಬರೆದ ವ್ಯಾಖ್ಯಾನಗಳ ಮೇಲೆ ವ್ಯಾಖ್ಯಾನ
೩. ಆಚಾರ್ಯರು ವೇದಗಳಿಗೆ ಬರೆದ ವ್ಯಾಖ್ಯಾನಗಳ ಮೇಲೆ ಟೀಕಾಚಾರ್ಯರ ಬರೆದ ವ್ಯಾಖ್ಯಾನಗಳ ಮೇಲೆ ಬರೆದ ವ್ಯಾಖ್ಯಾನ
೪. ಸ್ವತಂತ್ರ ಗ್ರಂಥಗಳು (ನದಿ ತಾರತಮ್ಯ ಸ್ತೋತ್ರ, ಕೃಷ್ಣ ಚಾರಿತ್ರ್ಯ ಮಂಜರಿ, ರಾಮ ಚಾರಿತ್ರ್ಯ ಮಂಜರಿ)
೫. ಗುರುಗಳ ಸ್ತವನ??

ಶ್ರೀ ಗುರುರಾಘವೇಂದ್ರರು ನ್ಯಾಯಸುಧಾ ಮೇಲೆ ಬರೆದ ಗ್ರಂಥ ಪರಿಮಳ. ಆದ್ದರಿಂದ ಅವರಿಗೆ ಪರಿಮಳಾಚಾರ್ಯ ಎಂಬ ಹೆಸರು. ಇದು ಮೇಲೆ ತಿಳಿಸಿದಂತೆ ಮೊರನೇ ವರ್ಗಕ್ಕೆ ಸೇರಿದ್ದು.

ಇನ್ನಾದರೂ ಪ್ರತಿ ಬಾರಿ ಶ್ರೀ ರಾಘವೇಂದ್ರರ ನೆನೆದಾಗ ತಪ್ಪದೆ ಪರಿಮಳ ಗ್ರಂಥದ ಬಗ್ಗೆಯೂ ನೆನೆಯೋಣ ಹಾಗೂ ಮಧ್ವ ಶಾಸ್ತ್ರದ ಪರಿಮಳ ಸವಿಯೋಣ.

ಅಭಿಜಿತ್ ವೀ ೨೦೧೭ ಶ್ರೀ ರಾಘವೇಂದ್ರರ ಆರಾಧನೆಯ ಅಂಗವಾಗಿ ಮಾಡಿದ ಪ್ರಥಮ ಪ್ರವಚನದ ಮುಖ್ಯ ಸಾರಾಂಶ. ಶ್ರೀ ಹರಿ ವಾಯುಗಳ ಕೃಪೆಯಿಂದ ಇನ್ನೂ ಹೆಚ್ಚಿನ ಸೇವೆ ಹೀಗೆ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.


No comments:

Post a Comment