Total Pageviews

Friday, July 8, 2016

ಶ್ರೀ ಹರಿವಾಯು ಸ್ತುತಿ ಮಾಧ್ವರ ವೇದ





ಶ್ರೀ ಹರಿ ವಾಯು ಸ್ತುತಿಗೆ ಮಾಧ್ವರ ವೇದದ ಸ್ಥಾನಮಾನ ಏಕೆ?

ಈ ಪ್ರಶ್ನೆಗೆ ಉತ್ತರಿಸುವ ಮೊದಲು ವೇದ ಎಂದರೇನು ಹಾಗೂ ವೇದಗಳೇಕೆ ನಮ್ಮ ಸಾಧನೆಗೆ ಬೇಕು ಎಂದು ಅರಿಯುವ.

ಡಿ ವಿ ಜಿ ಯವರ ಶ್ರೀಮಧ್ಬಗವದ್ಗೀತಾತಾತ್ಪರ್ಯ ಅಥವಾ ಜೀವನಧರ್ಮಯೊಗ ಗ್ರಂಥದ ದೈವಾಸುರಬೇಧವಿವೇಕಯೋಗ ಅಧ್ಯಾಯದ ಪುಟ ೪೧೨ ರ ಆಯ್ದ ಭಾಗ.

ಬರಿ ಬುದ್ಧಿಯ ಸ್ವತಂತ್ರ ವಿಚಾರದಿಂದ ಭಗವಂತನ ಗ್ರಹಿಸಲು ಸಾಧ್ಯವೋ?

ಮನುಷ್ಯ ಬುದ್ಧಿ ಕೆಲಸಮಾಡುವುದಕ್ಕೆ ವಿಷಯ ಸಾಮಗ್ರಿ ಬೇಕು. ಎಲ್ಲಿ ವಿಷಯವು ಶೂನ್ಯವೋ ಅಲ್ಲಿ ಬುದ್ಧಿ ಏನನ್ನೊ ಮಾಡಲಾರದು. ಬುದ್ಧಿಗೆ ಕಾರ್ಯಸಾಮಗ್ರಿ ಒದಗಿಸಿವುದು ಮನಸ್ಸು.  ಮನಸ್ಸಿಗೆ ಕಾರ್ಯಸಾಮಗ್ರಿ ಒದಗಿಸುವುದು ಇಂದ್ರಿಯಗಳು. ಇಂದ್ರಿಯಗಳು ವಿಷಯ ಸಂಪಾದನೆ ಮಾಡದೆ ಇದ್ದರೆ ಮನಸ್ಸಿನ ಕ್ಷೇತ್ರ ಖಾಲಿ. ಮನಸ್ಸು ನಿರುದ್ಯೋಗಿ ಸುಮ್ಮನಾದರೆ ಬುದ್ಧಿಯು ಸುಮ್ಮನಿರಬೇಕಾದದ್ದೆ. ಬುದ್ಧಿಯ ಕರ್ಮಕ್ಷೇತ್ರ ಹೀಗೆ ಪರಿಮಿತವಾಗಿದೆ.

ಭಗವಂತ, ವಾಯು ದೇವರು ದೇವತೆಗಳು ಇಂದ್ರಿಯಾತೀತರು. ಇಂದ್ರಿಯಗಳು ಆ ರಹಸ್ಯಗಳನ್ನು ಮುಟ್ಟಲಾರವು. ಇಂದ್ರಿಯಗಳೇ ಹೋಗದ ಕಡೆ ಮನಸ್ಸು ಹೇಗೆ ಹೊಕ್ಕಿತು?

ಇಂದ್ರಿಯಾಧೀನತೆಯ ಕಾರಣದಿಂದ - ಬುದ್ಧಿಗೆ ಅಸಮಾಥ್ಯ೯.  ಅತೀಂದ್ರಿಯ ವಸ್ತು ಜ್ಞಾನಕ್ಕೆ ವೇದವೊಂದೇ ಸಾಧನ. ವೇದವು ಪರ ವಸ್ತುವನ್ನು ಸಾಕ್ಷಾತ್ತಾಗಿ ಕಂಡವರ ವಾಕ್ಕು. ಅದನ್ನು ಗ್ರಹಿಸದಲ್ಲದೆ ನಮಗೆ ತತ್ವಜ್ಞಾನವಿಲ್ಲ.  ಆದರೆ ಬುದ್ಧಿ ಬೇಕಿಲ್ಲವೋ? ಬೇಕೇ ಬೇಕು. ಪರಿಶುದ್ಧವಾದ ಬುದ್ಧಿಇಲ್ಲದವನಿಗೆ ವೇದ ವಾಕ್ಯವು ಅರ್ಥವನ್ನು ಕೊಡದು.  ವೇದಾಕ್ಷರದಲ್ಲಿ ಅಡಗಿರುವ ಗೂಢವನ್ನು ಸಮ೦ಜಸವಾಗಿ ಗ್ರಹಿಸಿ ಸ್ವಾಧೀನಪಡಿಸಿಕೊಳ್ಳುವ ಕೆಲಸ ಬುದ್ದಿಗೆ ಸೇರಿದ್ದು.

ಹೀಗೆ ಶ್ರೀ ಹರಿವಾಯು ಸ್ತುತಿ ಕೂಡ ತ್ರಿವಿಕ್ರಮಪಂಡಿತಾಚಾರ್ಯರು ವಾಯುದೇವರ ಹನುಮ ಭೀಮ ಮಧ್ವ ರೂಪದಲ್ಲಿ ಶ್ರೀರಾಮ ಕೃಷ್ಣ ವೇದವ್ಯಾಸ ನಾರಾಯಣ ರೂಪಗಳನ್ನು ಪೂಜಿಸುವದನ್ನು ಕಣ್ಣಿಂದ ಕಂಡಾಗ ಸಹಜವಾಗಿ ಬಂದ ಸ್ತುತಿಯಾಗಿದೆ. ಆದ್ದರಿಂದ ವಾಯುದೇವರ ದರ್ಶನಕ್ಕೆ ನಮಗೆ ಕೊಂಡಿಯಾಗಿದೆ.  ಆದ್ದರಿಂದ ಶ್ರೀ ಹರಿ ವಾಯು ಸ್ತುತಿ ಮಾಧ್ವರಿಗೆ ವೇದ ಸಮಾನ ಸ್ತುತಿಯಾಗಿದೆ.


ವಿದ್ವಾನ: ಪವಮಾನಾಚಾರ್ ಕಲ್ಲಾಪುರ - ಶ್ರೀ ಹರಿ ವಾಯು ಸ್ತುತಿ ಪ್ರವಚನ (ಡಾ|| ರವಿಕಿರಣ ಕರಣಮ್ ಹಂಚಿಕೊಂಡ ಕೊಂಡಿ)
ಡಾ || ವ್ಯಾಸನಕೆರೆ ಪ್ರಭಂಜನಾಚಾರ್ಯರ ಅಮರ ಜ್ಯೋತಿ ನಗರದಲ್ಲಿ ನಡೆದ ಪ್ರವಚನ- ಪರಿಚಯ
ಡಾ || ವ್ಯಾಸನಕೆರೆ ಪ್ರಭಂಜನಾಚಾರ್ಯರ ಪ್ರತಿ ಶ್ಲೋಕದ ಪ್ರವಚನ

ಪ || ಡಾ || ಜಯತೀರ್ಥಾಚಾರ್ಯ ಮಳಗಿಯವರ ಅತ್ಯಅದ್ಭುತ ಭೀಮಸೇನ ದೇವರ ಬಗ್ಗೆ ಪ್ರವಚನ



|| ಶ್ರೀ ಕೃಷ್ಣಾರ್ಪಣ ಮಸ್ತು ||

No comments:

Post a Comment