Total Pageviews

Sunday, August 13, 2017

ಒಳ್ಳೆಯದಾದಾಗ ಭಗವಂತನ ಅನುಗ್ರಹ ಇಲ್ಲವಾದರೆ ನಮ್ಮ ಪ್ರಾರಬ್ಧ ಯಾಕೆ?

ಒಳ್ಳೆಯದೂ ಅಥವಾ ಕೆಟ್ಟದ್ದೋ ಮೂಲಭೂತವಾಗಿ ಒಂದು ಕಾರ್ಯದ ಪರಿಣಾಮ.

ಒಂದು ಕಾರ್ಯವಾಗಬೇಕಾದರೆ ಮೂರು ಬೇಕು. ಯೋಗ್ಯತೆ, ಪ್ರಯತ್ನ ಹಾಗೂ ಭಗವಂತನ ಸಂಕಲ್ಪ.

ಇನ್ನೂ ಒಳ್ಳೆಯದು ಅಥವಾ ಕೆಟ್ಟದ್ದು ಎಂದು ತೀರ್ಮಾನಿಸಲು ಭಗವಂತನ ಮಾಡಿದ ಸಂವಿಧಾನ ವೇದಗಳು. ಭಗವಂತ ನಮ್ಮ ಕರ್ಮಕ್ಕೆ ಅನುಗುಣವಾಗಿ ವೇದಗಳಲ್ಲಿ ತಿಳಿಸಿದಂತೆ ಫಲ ಕೊಡುವೆನೆಂದು ಸಂಕಲ್ಪ ಮಾಡಿದ್ದಾನೆ ಆದರೆ ಕೊಡಲೇ ಬೇಕೆಂಬ ಆಗ್ರಹ ಆತನಿಗಿಲ್ಲ. ನಾವು ವೇದಕ್ಕನುಗುಣವಾದ ಕರ್ಮ ಮಾಡಿಯೂ, ನಮಗೆ ಯೋಗ್ಯತೆ ಇದ್ದರೂ  ಕೂಡ ಒಳ್ಳೆಯ ಫಲ ಭಗವಂತ ಕೊಡದಿದ್ದರೆ ನಾವೇನು ಮಾಡಲು ಸಾಧ್ಯ? ಆದ್ದರಿಂದ ಒಳ್ಳೆಯ ಫಲ ನಮ್ಮ ಕರ್ಮ, ಯೋಗ್ಯತೆ, ಪುಣ್ಯ ಎಲ್ಲ ಇದ್ದಾಗಲೂ ಕೂಡ ಭಗವಂತನ ಅನುಗ್ರಹ ಇಲ್ಲದಿದ್ದರೆ ಸಿಗುವದಿಲ್ಲ.

ಆದ್ದರಿಂದ ಒಳ್ಳೆಯದಾಗಲು ಬೇಕಾದ್ದ ಎಲ್ಲ ಪೂರ್ವಾಪೇಕ್ಷಿತಗಳನ್ನು ಮಾಡಿದ್ದರೂ ಕೊನೆಯದಾಗಿ ಭಗವಂತನ ಅನುಗ್ರಹ ಬೇಕೇ ಬೇಕು. ಇನ್ನೂ ಇಲ್ಲ ಅಂದ್ರೆ ಭಗವಂತ ಯಾರಿಗೂ ಪಕ್ಷಪಾತ ಮಾಡುವುದಿಲ್ಲ. ಅದೇನೇ ಇದ್ದರೂ ನಮ್ಮ ಸ್ವರೂಪ ಹಾಗೂ ಪೂರ್ವ ಕರ್ಮ ಅಥವಾ ಪ್ರಾರಾಭ್ದಕ್ಕನುಗುಣವಾಗಿ.

ಫೇಸ್ ಬುಕ್ ನಲ್ಲಿ ಸುಶೀಲ್ ಜೋಶಿ ಕೇಳಿದ ಪ್ರಶ್ನೆಗೆ ಉತ್ತರ.

No comments:

Post a Comment