Total Pageviews

Tuesday, May 3, 2016

ಭೀಮ - ಧುರ್ಯೋಧನ

ಪ್ರತಿಯೊಬ್ಬರ
ಮನದಲ್ಲೂ
ಇದ್ದಾರೆ
ಒಬ್ಬ
ಧುರ್ಯೋಧನ
ಒಬ್ಬ
ಭೀಮಸೇನ || ೧ ||

ಮಾಡಿದ
ಸತ್ಕಾರ್ಯಗಳ
ಅಹಂಕಾರದಿಂದ
ಧುರ್ಯೋಧನ
ಹಿಗ್ಗದಿರಲಿ || ೨ ||

ಮಾಡಿದ
ದುಷ್ಕರ್ಮಗಳ
ಪಾಪ ಪ್ರಜ್ಞೆಯಿಂದ
ಭೀಮಸೇನ
ಕುಗ್ಗದಿರಲಿ || ೩ ||

ಭೀಮಸೇನನೇ
ಗೆಲ್ಲಲಿ
ಆದರೆ
ಧುರ್ಯೋಧನ
ಗೆದ್ದಾಗ
ಭೀಮಸೇನ
ಎದೆಗುಂದದಿರಲಿ || ೪ ||

|| ಶ್ರೀ ಕೃಷ್ಣಾರ್ಪಣ ಮಸ್ತು ||

No comments:

Post a Comment