Total Pageviews

Thursday, January 25, 2018

ಸಂಧ್ಯಾವಂದನೆ - ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ

ಪ್ರವಚನ ೧
ಪ್ರವಚನ ೨
ಪ್ರವಚನ ೩
ಪ್ರವಚನ ೪
ಪ್ರವಚನ ೫
ಪ್ರವಚನ ೮
ಪ್ರವಚನ ೯
ಪ್ರವಚನ ೧೦
ಪ್ರವಚನ ೧೧

ಸೂರ್ಯೋದಯದ ೯೦ ನಿಮಿಷ ಮೊದಲು. ರಾತ್ರಿಯ ಕೊನೆಯ ೧/೮ ಭಾಗ ಸಂಧ್ಯಾ ಕಾಲ.

ಮುಂಜಾನೆ ೪:೩೦ ರಿಂದ ೬. ಬ್ರಹ್ಮ ನಿಯಂತ್ರಿಸುವ ಕಾಲ. ಚಿತ್ತವನ್ನು ನಿಯಂತ್ರಿಸುತ್ತಾನೆ. ಅದಕ್ಕಾಗಿ ಈ ಕಾಲದಲ್ಲಿ ಮಾಡಿದ ಅಭ್ಯಾಸ ಚೆನ್ನಾಗಿ ನೆನಪು ಉಳಿಯುತ್ತದೆ.

ದಿನಕ್ಕೆ ಬೇಕಾದ ನಿದ್ದೆ: ೪-೬ ತಾಸು. ೪ ಘಂಟೆ ನಿದ್ದೆ ೨೦ ಘಂಟೆಯ ಚಟುವಟಿಕೆಗೆ ಸಾಕು.

ಮಾನಸಿಕವಾಗಿ ಭಾಗವಹಿಸುವುದು ಮುಖ್ಯ.

ಹಸಿದ ಅತಿಥಿಯಲ್ಲಿ ವೈಶ್ವಾನರ ರೂಪಿ(ಬೆಂಕಿ) ಭಗವಂತ ಇರುತ್ತಾನೆ. ಬಂದವರಿಗೆ ನೀರು ಕೂಡುವುದು. ಹಸಿವಿನ ಬೆಂಕಿ ಮನೆಗೆ ಬೀಳುತ್ತೆ.

ಅಘ್ಯ೯ : ಕೈ ತೊಳೆಯುವುದು
ಪಾದ್ಯ : ಕಾಲು ತೊಳೆಯುವುದು
ಎರಡು ನೀರನ್ನು ಬೇರೆ ಬೇರೆಯಾಗಿ ಇಡುವುದು. ಒಂದನೊಂದು ಸೇರಿಸದಿರುವುದು.
ಆಹಾರ ಸೇವಿಸುವ ಮೊದಲು ಹಾಗೂ ನಂತರ ಬಾಯಿ ತೊಳೆದುಕೊಳ್ಳುವುದು. ಆಚಮನ.
ಮಧುಪರ್ಕ: ಹಾಲು ಹಾಗೂ ಜೇನು

ಇಂಗ್ಲೀಷ್ ಕಳ್ಳರ ಭಾಷೆ. ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಕದ್ದು ಕದ್ದು ಸೇರಿಸಿದ್ದಾರೆ.

 ಪ್ರತಿ ಚಲನವಲನದಲ್ಲೂ ಭಗವಂತನ ಅನುಸಂಧಾನ ಇಟ್ಟುಕೊಂಡಿರುತಿದ್ದರು ಪ್ರಾಚೀನರು.

ಪೂಜೆ ಒಂದು ಪ್ರತೀಕ / ಪರಿಕಲ್ಪನೆ ಅದು ಬರೀ ಕ್ರಿಯೆಯಲ್ಲ. ಅದರ ಹಿಂದಿನ ಕಾರಣ ಅರಿತು ಅನುಸಂಧಾನ ಮಾಡುವುದು ಮುಖ್ಯ.

ಭಗವಂತನ ಕರ್ಣದಿಂದ ತೀರ್ಥ ಸೃಷ್ಟಿ (ಭಾಗವತ). ಬಲಗಿವಿ ಮುಟ್ಟಿದರೆ ಸಮಸ್ತ ಶಾಸ್ತ್ರ ಹಾಗೂ ಗಂಗಾದಿ ತೀರ್ಥಗಳ ಮುಟ್ಟಿದಂತೆ.

ಅಹಂಕಾರ ನಮ್ಮನ್ನು ಭಗವಂತನಿಂದ ದೂರ ಸರಿಸುವ ಮೂಲವ್ಯಾಧಿ. ಹರಿ ಸರ್ವೋತ್ತಮಕ್ಕೆ ಧಕ್ಕೆ.

ಶಾಸ್ತ್ರ ಓದಿದ್ದು, ದಿನ ನಿತ್ಯ ಕರ್ಮ, ಸತ್ಕರ್ಮ ನಾನು ಮಾಡಿದೆ ನಾನು ಮಾಡಿದೆ ಎಂಬುದನ್ನು ಮೊದಲು ಕಡಿಮೆ ಮಾಡಬೇಕು.

ನಿಶುಸಿದ ಗಣಪತಿ: ಜೀವಗಣಗಳ ಇಂದ್ರಿಯಗಳ ಸ್ವಾಮಿ ಬಾ ಕೂಡು. ಪೀಠದಲ್ಲಿ ನಿನ್ನ ಪ್ರತೀಕ ಇಟ್ಟಿದ್ದೇನೆ ಅದರಲ್ಲಿ ಹಾಗೂ ನನ್ನಲ್ಲಿ ಬಂದು ಕೂತು ಪೂಜೆ ಮಾಡಿಸು. ನೀನೆಲ್ಲದೆ ಏನು ನಡೆಯದು. ಜ್ಞಾನಿಗಳ ಸಮುದಾಯದಲ್ಲಿ ಶ್ರೇಷ್ಟ ಏಕೆಂದರೆ ನಿನಗೆಲ್ಲ ತಿಳಿದಿದೆ. ಪೂಜಿಸುವ ವಸ್ತುಗಳಲ್ಲಿ ಶ್ರೇಷ್ಟ. ನೀನು ಅತ್ಯಂತ ಆಶ್ಚರ್ಯಕಾರ ವಸ್ತು. ನಾನೇನು ಮಾಡುತಿಲ್ಲ. ನಿನ್ನ ಪೂಜೆಯನ್ನು ನೀನೇ ಮಾಡು. ನಾನು ಕೇವಲ ಒಂದು ಪೂಜಾ ಸಾಮಗ್ರಿ. ನನಗೆ ಏನು ಮಾಡುವ ಶಕ್ತಿ ಇಲ್ಲ. ನಾವು ದೇವರ ಪ್ರತಿಬಿಂಬ. ಪ್ರತಿಬಿಂಬಕ್ಕೆ ಸ್ವತಂತ್ರ ಕ್ರಿಯೆಯಿಲ್ಲ.  

ಬ್ರಾಹ್ಮಣ: ಶಬ್ದದ ಅರ್ಥ ಜ್ಞಾನಿ ಎಂದರ್ಥ. ಜನ್ಮದಿಂದ ಬರುವುದಲ್ಲ. ಗಳಿಸಬೇಕಾದದ್ದು. ದೇವರ ಬಗ್ಗೆ ಜ್ಞಾನ ಇದ್ದು ಹಾಗೂ ಉಪಾಸನೆ ಮಾಡುವವರು.

ಅನುಸೃತ ಸ್ವಭಾವತ: ಸಮಸ್ತ ಇಂದ್ರಿಯ, ಮನಸ್ಸು ಆತ್ಮ, ಎಲ್ಲ ಪರಿವಾರ

ಆಚಮನ:

ಮೃತ್ತಿಕಾ: ಹಿಟ್ಟಿನಂತ ಸಾರಯುತ್ತವಾದ ಕೆಂಪು ಮಣ್ಣು. ಬೆಣ್ಣೆಯಂತ ಮೃದು ಮಣ್ಣು.

ಮಡಿ: ಯಾವುದು ಮನಸ್ಸನ್ನು ಶುದ್ಧಪಡಿಸುತ್ತೋ ಅದೇ ನಿಜವಾದ ಮಾಡಿ. ಮನಸ್ಸು ನಿರ್ಮಲವಾಗುವದೇ ಮಾಡಿ

ಯಾವುದು ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸುತ್ತದೋ ಅದೇ ಮಾಡಿ ಯಾವುದು ದೂರ ಮಾಡುತ್ತೋ ಅದೇ ಮೈಲಿಗೆ. ಇದು ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರಬಹುದು.

ಉಧ್ವ೯ ಪುಂಡ್ರ ವೈದಿಕ ಚಿನ್ಹೆ. ವೇದಾಧಿಕಾರ ಬರಲು ಪುಂಡ್ರ ಹಾಕಿಕೊಳ್ಳಬೇಕು. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಶಕ್ತಿ ಮೇಲ್ಮುಖವಾಗಿ ಚಲಿಸಲು ೭ ಶಕ್ತಿ ಕೇಂದ್ರಗಳನ್ನು ಸಕ್ರಿಯಗೊಳಿಸಿ ವೇದ ಮಂತ್ರದ ಧ್ಯಾನಕ್ಕೆ ಅಣಿಗೊಳಿಸುವುದು.

ನೀರ್ನಾಳ ಗ್ರಂಥಿಗಳು  ೭ ಚಕ್ರಗಳಿಂದ ಪ್ರತಿನಿಧಿಸಿ ಅವನ್ನು ಸಕ್ರಿಯಗೊಳಿಸಲು ಪುಂಡ್ರ ಧಾರಣೆ. ಪ್ರತಿಯೊಂದನ್ನೂ ಒಂದೊಂದು ಸಮುದ್ರ ಎಂದು ಗುರುತಿಸಿದ್ದಾರೆ. ಪ್ರತಿ ಗ್ರಂಥಿಯಲ್ಲಿ ಶಕ್ತಿ ಸಹಜವಾಗಿ ಕೆಳ ಮುಖವಾಗಿ ಹರಿಯುತ್ತದೆ. ಉಧ್ವ೯ ಪುಂಡ್ರ ಅವನ್ನು ಸಕ್ರಿಯಗೊಳಿಸಿ ಶಕ್ತಿಯನ್ನು ಮೇಲೆ ಹರಿಯುವಂತೆ ಮಾಡುತ್ತದೆ. ಆಧ್ಯಾತ್ಮಿಕ ಕೇಂದ್ರಗಳು.

೩೬೦ ಎಲಬುಗಳು ೩೬೦ ಇಟ್ಟಿಗೆ ಇಟ್ಟು ಹೋಮ ಮಾಡುವ ಸಂಕೇತ. ದೇವರು ಸೃಷ್ಟಿ ಮಾಡಿ ಕೊಟ್ಟಿರುವ ಯಜ್ಞ ಕುಂಡ. ೩೬೦ ದಿನದ ಕಾಲ ಕುಂಡ. ೩೬೦ ಡಿಗ್ರೀ ಪೂರ್ಣ ವೃತ್ತ.

ಜಪದಿಂದ ಒಳಗಿನ ೭೨೦೦೦ ನರ ನಾಡಿಗಳು ಶಕ್ತಿ ಕೇಂದ್ರಗಳು ಸಕ್ರಿಯಗೊಳಿಸು. ೧೦೦೦ * ೨೪ ಅಕ್ಷರ * ೩ = ೭೨೦೦೦ ಅದಕ್ಕೆ ಗರಿಷ್ಟ ಗಾಯತ್ರಿ ಜಪದ ಮೇಲೆ ಮಿತಿ ವಿಧಿಸಿದ್ದಾರೆ.

ಈಡ(ಎಡ), ಪಿಂಗಳ(ಬಲ), ಸುಶಮ್ನ(ಮಧ್ಯ)


ಆಚಮನ - ಅನ್ನಮಯ ಕೋಶ
ಪ್ರಾಣಾಯಾಮ - ಪ್ರಾಣಮಯ ಕೋಶ

ಪ್ರೋಕ್ಷಣೆ:: ಮಂತ್ರ ಸ್ನಾನ
ಓ ಭಗವಂತ ಪ್ರಾಣದೇವರೇ ಜಲಾಭಿಮಾನಿ ದೇವತೆಗಳೇ ನೀವು ನಮ್ಮ ಮನೆಯಲ್ಲಿ ಆನಂದ ತುಂಬುವವರು. ನಾವು ಒಳ್ಳೆಯ ಸಾರವತ್ತಾದ ಆಹಾರ ಸೇವಿಸಬೇಕು. ನಮ್ಮ ಕಂಠದಲ್ಲಿ ನೆಲಿಸಿ ನಮ್ಮಿಂದ ವೇದ ಮಂತ್ರಗಳನ್ನು ಹೇಳಿಸಿ ಭಗವಂತನ ಕಾಣುವ ಕಣ್ಣು ಕೊಡಿ. ನಿಮ್ಮ ಅತ್ಯಂತ ಮಂಗಳಕರ ಅಮೃತ ರಸಕ್ಕೆ ನಾವು ಭಾಜನರಾಗುವಂತೆ ಮಗುವನ್ನು ಪ್ರೀತಿಸಿ ಮುದ್ದಾಡುವ ತಾಯಿಯಂತೆ ಬಂದು ನೆಲಿಸಿ. ನೀವು ಜಿನುಗುತ್ತಿರುವ ಮನೆಗೆ ನಾವು ಹುಡುಕಿಕೊಂಡು ಹೋಗುತ್ತೇವೆ. ನಮಗೆ ಅಂತ ಎತ್ತರಕ್ಕೆ ಹೋಗುವ ಯೋಗ್ಯತೆ ಕೊಡಿ.

ಬಾಹ್ಯ ಆಚರಣೆಗೆ(ritual) ಒತ್ತು ಕೊಟ್ಟು ಆಂತರ್ಯವನ್ನು(spiritual) ಮರೆತು ಬಿಟ್ಟರು.

ಶಾಸ್ತ್ರ ಓದಿ ಮನುಷ್ಯತ್ವ ಕಳೆದುಕೊಳ್ಳುಬಾರದು.

ಹೊಟ್ಟೆ ಹಾಗೂ ತಲೆಗೆ ಎರಡಕ್ಕೂ ಆಹಾರ ಹಾಗೂ ವಿರಾಮ ಕೊಡಬೇಕು. ಪಾಡ್ಯ ತಲೆಗೆ ವಿರಾಮ. ಏಕಾದಶಿ ಹೊಟ್ಟೆಗೆ ವಿರಾಮ.

ಕ್ರೋಧ ನಾವು ಬರಿಸಿಕೊಂಡಿದ್ದು

ನಮ್ಮ ಇಷ್ಟ ಪೂರ್ತಿ ಆಗದಿದ್ದಾಗ ಸಿಟ್ಟು ಬರುವುದು. ನಾನು ಹೇಳಿದ ಹಾಗೆ ನಡೆಯಲಿಲ್ಲ ಎಂಬುದಕ್ಕೆ ಬರುವುದು.

ಕ್ರೋಧ ಅನಪೇಕ್ಷಿತ. ಆರೋಗ್ಯ ಕೆಡಿಸಿಕೊಂಡು ಮನೆ ನರಕ ಮಾಡುವ ಸಾಧನ. ಜಗಳದಿಂದ ಸಮಸ್ಯೆ ಬಗೆಹರೆಯುವುದಿಲ್ಲ. ಕೋಪ ಬಂದಾಗ ಸುಮ್ಮನಾಗುವುದೇ ಮಾರ್ಗ. ಕೋಪದಿಂದ ಕೆಟ್ಟ ಕೆಲಸವಾಗುವುದು.

ಕೈಯಿಂದ, ಹೊಟ್ಟೆ, ಮಾತು, ಜನೇನೇಂದ್ರಿಯ ಎಲ್ಲದಿಂದ ತಪ್ಪು ಮಾಡಿದ್ದೇನೆ. ನೀನು ಕರುಣಾಮಯಿ ನಾನು ಬರೀ ತಪ್ಪು ಮಾಡುವವನು. ನನ್ನನ್ನು ತಾಯಿಯಂತೆ ಕ್ಷಮಿಸಿ, ಸೂರ್ಯನ ಕಿರಣಗಳಲ್ಲಿ ಅಂತರ್ಗತನಾದ ನೀನು ಅವುಗಳನ್ನು ಸುಟ್ಟು ಬಿಡು.

ಮಂದೇಹ: ಆಲಸ್ಯ ಎಂಬ ರಾಕ್ಷಸರು. ಸೂರ್ಯೋದಯ ಕಾಲದಲ್ಲಿ ನಮಗೆ ಸೋಮಾರಿತನ ತುಂಬುವ ಶಕ್ತಿ ವಾತಾವರಣದಲ್ಲಿ ಜಾಗೃತವಾಗಿರುತ್ತೆ.

ಸೂರ್ಯೋದಯ ಹಾಗೂ ಸೂರ್ಯಾಸ್ತ ಕಾಲದಲ್ಲಿ ಪ್ರತಿ ದಿನ ಕೆಂಪು ಕಿರಣಗಳು ಬರೀ ಕಣ್ಣಿಗೆ ಹಾನಿಕರ. ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಬರಿಗಣ್ಣಿನಿಂದ ನೋಡಬಾರದು.

ಗ್ರಹಣ ಕಾಲದಲ್ಲಿ ವಿಶೇಷ ಶಕ್ತಿ ಜಾಗೃತವಾಗಿರುತ್ತದೆ. ಅದಕ್ಕೆ ಹೊಟ್ಟೆ ಖಾಲಿ ಇಟ್ಟು ತಲೆ ತುಂಬಿಸಿಕೊಳ್ಳಿ. ಊಟ ಮಾಡಿ ತಲೆಯ ಶಕ್ತಿ ಕುಗ್ಗಿಸಿಕೊಳ್ಳಬಾರದು. ಯಾವುದೇ ರೋಗ ಬರುತ್ತದೆ ಎಂಬುದು ಸರಿಯಲ್ಲ.

ಕೆಲಸ ಯಶಸ್ವಿಯಾಗಲು:
[೧] ಕಣ್ಣು ಮುಚ್ಚಿ ಮಾಡಬೇಡ
[೨] ಮಾಡುವ ಮುಂಚೆ ಹಿಂದೆ ಮುಂದೆ ತಿಳಿದುಕೊಳ್ಳಿ
[೩] ನಂಬು
[೪] ಕೆಲಸ ಮಾಡು
ಜ್ಞಾನವಿಲ್ಲದೆ ಬರೀ ಕರ್ಮ ಮಾಡುವುದು ಸರಿಯಲ್ಲ.

ನೀಲ ಪ್ರಭೆ : ಜ್ಞಾನದ ಪ್ರಭೆ. ಶ್ರೀ ಕೃಷ್ಣನ ಮೈ ಬಣ್ಣ ನೀಲಿ. ಅಗಾಧತೆ ಹಾಗೂ ಆಳದ ಸಂಕೇತ.

ಎರಡು ಅಡಿಗಳವರಗೆ ಪ್ರಭಾವಳಿ ಇರುವದರಿಂದ ಒಬ್ಬರಿಂದ ಒಬ್ಬರ ಮಾನಸಿಕ ಪವಿತ್ರತೆಯ ಮೇಲೆ ಪ್ರಭಾವ ಇರುತ್ತದೆ.

ದೃಢ ಮನೋ ನಿಶ್ಚಯದಿಂದ ನಮಗೆ ಏನೋ ಬೇಕೋ ಅದನ್ನು ಆಕರ್ಷಿಸಬಹುದು. ಪಾಪ ಸುಟ್ಟು ಹೋಯಿತು, ಅಮೃತ ಹರಿದು ಬಂದು ನಮ್ಮನ್ನು ಶುದ್ಧ ಮಾಡಿತು ಎಂಬ ದೃಡ ನಂಬಿಕೆ ಇದ್ದರೆ ಖಂಡಿತ ಸಾಧ್ಯ.

ವೇದದಲ್ಲಿ ಅನೇಕ ಗಾಯತ್ರಿ ಛಂದಸ್ಸಿನ ಮಂತ್ರಗಳಿವೆ.

ವೇದದಲ್ಲಿ ನಾಲ್ಕು ಸ್ವರಗಳಿವೆ. ಉದಾತ್ತ, ಅನುದಾತ್ತ,  ಪ್ರಚೆಯ,  ಸ್ವರಿತ. ಸ್ವರ ಗೊತ್ತಿರದಿದ್ದರೆ ಏಕ ಸ್ವರದಲ್ಲಿ ಅಥವಾ ಏಕ ಶ್ರುತಿ ಹೇಳಿ.

ಸಹಜ ಮೂರು ಸ್ಥಿತಿಗಳು: ಎಚ್ಚರ, ಕನಸು, ನಿದ್ರೆ. ನಾಲ್ಕನೆಯದು: ಧ್ಯಾನ.
ಮೂರು ರೂಪಗಳನ್ನು ಮೂರು ಪಾದಗಳು ಹೇಳುತ್ತವೆ
ಹತ್ತು ರೂಪಗಳನ್ನು ಹತ್ತು ಅಕ್ಷರಗಳು ಹೇಳುತ್ತವೆ
ಇಪ್ಪತ್ತುನಾಲ್ಕು ಅಕ್ಷರಗಳು ಇಪ್ಪತ್ತು ನಾಲ್ಕು ತತ್ವಗಳನ್ನು ಹೇಳುತ್ತವೆ.

Wednesday, January 24, 2018

ಸಂಧ್ಯಾವಂದನೆ - ಡಾ|| ವ್ಯಾಸನಕೆರೆ ಪ್ರಭಂಜನಚಾರ್ಯ ಪ್ರವಚನ

ಡಾ|| ವ್ಯಾಸನಕೆರೆ ಪ್ರಭಂಜನಚಾರ್ಯ ಪ್ರವಚನ

ಆರೋಗ್ಯ = ದೈಹಿಕ + ಮಾನಸಿಕ + ಆಧ್ಯಾತ್ಮಿಕ

ದೈಹಿಕ : ಶ್ರವಣ
ಮಾನಸಿಕ: ಮನನ
ಆಧ್ಯಾತ್ಮಿಕ: ಧ್ಯಾನ

ಕಾಲಕ್ಕೆ ತಕ್ಕಂತೆ ಮಾಡದಿದ್ದರೆ ಸಂಧ್ಯಾವಂದನೆಗೆ ಅರ್ಥವಿಲ್ಲ. ಕಾಲದ ಪ್ರಾಮುಖ್ಯತೆ ತೋರಲು ಸಂಧ್ಯಾ ಪದದ ಬಳಕೆ.

ಮೂರು ಭಾಗ:
[೧] ಜಪದ ಮೊದಲು
[೨] ಜಪ
[೩] ಜಪದ ನಂತರ

ಆಚಮನ: ೨೪ ನಾಮಗಳ ಮೂಲಕ ದೇವರ ಗುಣಗಳ ಸ್ಮರಣೆ.
ಕೇಶವ: ಬ್ರಹ್ಮ ರುದ್ರ ಪ್ರವರ್ತಕ. ಹರಿ ಸರ್ವೋತ್ತಮ. ಸ್ವತಂತ್ರ.

ಪ್ರಾಣಾಯಾಮ: ಆಯಾಮ - ನಿಯಂತ್ರಣ. ಪ್ರಾಣ ಶಕ್ತಿಯ ನಿಯಂತ್ರಣ. ಸ್ನಾನ ಹೊರಗಿನ ಶುದ್ದತೆ. ಪ್ರಾಣಾಯಾಮ ಆಂತರಿಕ ಶುದ್ಧತೆ.
ರೇಚನ: ಹೊರಗೆ ಹಾಕುವುದು (ಕೆಟ್ಟದ್ದು )
ಪೂರಕ: ಒಳಗೆ ತಗೆದುಕೊಳ್ಳುವುದು (ಒಳ್ಳೆಯದು)
ಕುಂಭಕ: ಹಿಡಿದಿಟ್ಟುಕೊಳ್ಳುವುದು

ಅನ್ನ, ನೀರು ಹಾಗೂ ವಾಯು ಮೂರು ಆಹಾರಗಳು. ಉಪವಾಸದಲ್ಲಿ ವಾಯು ಸೇವನೆಯಿಂದ ಶುದ್ದತೆ ಹೆಚ್ಚು.

ಬ್ರಾಹ್ಮ ಮುಹೂರ್ತ: ಬ್ರಹ್ಮ + ವಾಯು

ಆಚಮನ + ಪ್ರಾಣಾಯಾಮ + ಸಂಕಲ್ಪ : ಮೂರು ಪ್ರತಿ ಕಾರ್ಯ ಮಾಡುವ ಮೊದಲು ಮಾಡಲೇಬೇಕು

ನಾರಾಯಣ + ಲಕ್ಷ್ಮಿ ಬದಲಾಗದಿರುವರು. ಲಕ್ಷ್ಮಿ ಬರೀ ನಾರಾಯಣನ ಮೇಲೆ ಅಷ್ಟೇ ಅವಲಂಬಿತರು.

ಭಗವಂತ ಹೇಳಿದ್ದನ್ನು ಮಾಡಬೇಕು. ಅವನಿಗೆ ಪ್ರೀತಿಯಾಗುವಂತೆ ಮಾಡಬೇಕು. ಅವನಿಗೆ ಸಮರ್ಪಣೆ ಮಾಡಬೇಕು.

ಮಾರ್ಜನ: ಮಂತ್ರ ಸ್ನಾನ. ನೀರಿನಲ್ಲಿ ಹತ್ತು ದೇವತೆಗಳಿದ್ದಾರೆ. ವಾಯು ದೇವರಿದ್ದಾರೆ. ಜಲಚರ ಬದುಕಿರುವುದು ಆ ಗಾಳಿಯಿಂದಲೇ. ನೀರು ದೇವರ ಮೊದಲ ಸೃಷ್ಟಿ. ನೀರೇ ಜೀವನ.

ಜಲಾಭಿಮಂತ್ರಣ:


ಸೂರ್ಯ ಮಂತ್ರ : ಅನ್ನ + ಆರೋಗ್ಯ + ಜಾತಕ


ಅಪ್ಪಣೆ ತಗೆದುಕೊಂಡು ಕೊಡುವುದು.

ಋಷಿ: ತಲೆ
ದೇವತೆ: ಮುಖ
ಛಂದಸ್ಸು: ಹೃದಯ

ಸಂಧ್ಯಾ ಕಾಲಕ್ಕೆ ಮಂತ್ರ ನವೀಕರಣ.

ಅಂಗನ್ಯಾಸ: ಅಂಗಗಳ(ತಲೆ, ಹೃದಯ) ನ್ಯಾಸ
ಕರನ್ಯಾಸ: ಕರಗಳ ನ್ಯಾಸ

ಉಪಸ್ಥಾನ : ಎಲ್ಲ ದೇವರಿಗೂ ನಮಸ್ಕಾರ. ಹತ್ತು ದಿಕ್ಕುಗಳಿಗೂ ನಮಸ್ಕಾರ.  ಋಷಿಗಳಿಗೆ, ಜನ್ಮಾಂತರದ ತಂದೆ ತಾಯಿಗಳಿಗೆ ನಮಸ್ಕಾರ. ದುರ್ಗ ನಮಸ್ಕಾರ. ವಾಸುದೇವ ನಮಸ್ಕಾರ. ನಮೋಸ್ತು ಅನಂತಾಯ..

ಅಭಿವಾದನ: ತಾನು ಯಾರು ಎಂದು ಹೇಳಿಕೊಂಡು ಸಾಷ್ಟಾಂಗ ಮಾಡಬೇಕು.

ವಾಸುದೇವ: ಮುಕ್ತಿ ಕೊಡುವ ರೂಪ

ವಿಧಿ-ವಿಧಾನ

ತುಳಸಿ ಪೂಜೆ: ಸ್ತ್ರೀಯರಿಗೆ.
- ಕಾರ್ತಿಕ ಮಾಸದಲ್ಲಿ ಹುಣ್ಣಿಮೆ ಅವತಾರ
- ಸಮುದ್ರ ಮಥನ ಕಾಲದಲ್ಲಿ ಧನ್ವಂತರಿ ಅವತಾರದ ಕಣ್ಣಿನಿಂದ ಬಿದ್ದ ಅಮೃತ ಬಿಂದುವಿನಿಂದ ಹುಟ್ಟಿದ್ದು
- ಬೆಳಸಬಹುದು ಆದರೆ ಬಿಡಿಸುವಂತಿಲ್ಲ
- ಪ್ರದಕ್ಷಿಣೆ
- ಅರಿಶಿನ ಹಾಗೂ ಕುಂಕುಮ
- ತುಳಸಿ ಸಹಸ್ರ ನಾಮ
- ಉತ್ತ್ಹಾನ ದ್ವಾದಶಿ : ತುಳಸಿ ಲಗ್ನ


ಗೋವಿನಲ್ಲಿಲ್ಲದ ದೇವರೇ ಇಲ್ಲ.

Tuesday, January 16, 2018

ಭಕ್ತಿ ಎಂದರೇನು?

ವಿದ್ವಾನ್ || ಕೃಷ್ಣರಾಜ ಕುಟ್ಪಡಿ
ಭಕ್ತಿ ಎಂದರೇನು? ಭಾಗ ೧
ಭಕ್ತಿ ಎಂದರೇನು? ಭಾಗ ೨
ಭಕ್ತಿ ಎಂದರೇನು? ಭಾಗ ೩

ಸಾರಾಂಶ: ವಿಶ್ವಾಸ ವೃದ್ಧಿಸುವ ಪ್ರವಚನ

ಎಲ್ಲ ಶಾಸ್ತ್ರಗಳ ಮುಖ್ಯ ಗುರಿ ಭಗವಂತನ ಅರಿವು. ಆ ಅರಿವು ಭಗವಂತನ ಪ್ರೀತಿಗೆ ಕಾರಣವಾಗಲು.

ಪ್ರೀತಿಯ ರೂಪ: ಭಕ್ತಿ => ಗೌರವ => ಸ್ನೇಹ(ಜಿಡ್ಡು) => ವಾತ್ಸಲ್ಯ

[೧] ಮಹಾತ್ಮ್ಯ(ದೇಶ ಕಾಲದ ವ್ಯಾಪ್ತಿ ಮೀರಿ ಒಬ್ಬನೇ ಮಹಾ ಆತ್ಮ)  ಜ್ಞಾನ ಪೂರ್ವಕ,
[೨] ಸುದೃಡ (ಬೇರೆ ಎಲ್ಲಕ್ಕೆ ಹೋಲಿಸಿದಾಗ ಕೂಡ)
[೩] ಸರ್ವೋತ್ತಮ
ಎಂಬ ಅರಿವಿನಿಂದ ಕೂಡಿದ ಸ್ನೇಹ.

ದೇವರು ಪ್ರತಿ ಉಸಿರು, ಉಂಡ ಅನ್ನವನ್ನು ಮನಸ್ಸು, ದೇಹ ಹಾಗೂ ಮಲವಾಗಿ ಪರಿವರ್ತಿಸಿ ಮಾಡಿದ ಅನಂತ ಉಪಕಾರ. ಎಲ್ಲೆಲ್ಲಿ ಉಪಕೃತರೋ ಅಲ್ಲೆಲ್ಲಿ ಭಕ್ತಿ ಬೇಕು.

ಪ್ರತಿ ಕೆಲಸದಲ್ಲೂ ಅರಿವು ಮೂಡಿದಾಗ ಭಕ್ತಿ ಸ್ವಾಭಾವಿಕವಾಗಿ ಹುಟ್ಟುತ್ತದೆ.

ಭಕ್ತಿಯೇ ತಾಯಿ ಬೇರು. ಜ್ಞಾನದ ಆಸಕ್ತಿ ಬರಲು ಕೂಡ ಸ್ವಲ್ಪ ಭಕ್ತಿ ಬೇಕು. ಆದರೆ ಜ್ಞಾನವಿಲ್ಲದೆ ಭಕ್ತಿ ಬೆಳೆದಾಗ ಮೂಡ ನಂಬಿಕೆ ಆಗುವ ಭಯ ಇದೆ.

ನಾರದ : ದೇವರ ಮೇಲೆ ಭಕ್ತಿ ಹುಟ್ಟಿಸುವರು

ನಾವು ದೇವರನ್ನು ನಾವು ಹೇಗೆ ಉಪಾಸನೆ ಮಾಡುತ್ತೇವೋ ಹಾಗೆ ಫಲಗಳು ದೊರೆಯುತ್ತವೆ.

ಒಂದು ಕೆಲಸವಾಗಲು ಮೂರು ಬೇಕು:
[೧] ಜ್ಞಾನ  
[೨] ಇಚ್ಛಾ 
[೩] ಕ್ರಿಯಾ

ಭಕ್ತಿಗೆ ಮೊದಲ ಮೆಟ್ಟಿಲು ಶ್ರವಣ.

ಭಕ್ತಿ ನಮ್ಮನ್ನು ನಾವು ಅರಿತು ಭಗವಂತನ ಅರಿವುದು.

ವಾಯುಸ್ತುತಿಯಲ್ಲಿ ಕೇಳಿದ ಭಕ್ತಿ: ಶ್ಲೋಕ ೧೪ ಮಾತರ್ಮೆ ಮಾತರಿಶ್ವನ್
[೧] ಎತ್ತರವಾದ
[೨] ನಿಮಿತ್ತವಾಗಿ ಅಲ್ಲದ (ಆಗ ಆ ಸಂದರ್ಭಕ್ಕೆ ಸೀಮಿತವಾಗದ)
[೩] ಯಾವದೋ ಪ್ರಭಾವಕ್ಕೆ ಮಾತ್ರ ಸೀಮಿತವಾಗದ
[೪] ನಿಶ್ಚಲವಾದ : ದೃಡವಾದ
[೫] ಸರ್ವ ಗುಣ ಪೂರ್ಣ ಮತ್ತು ಸರ್ವ ಶಕ್ತನಾದ ಅವನು ನಮಗೆ ಏನು ಮಾಡುತ್ತಾನೋ ಅದೇ ಸರಿ ಎಂಬ ನಂಬಿಕೆ ಇರುವಂತ
[೬] ನಿರಂತರವಾದ
ಭಕ್ತಿಯನ್ನು ಈಗಲೇ ಕೊಡಿ.

ದುಡ್ಡಿಗಾಗಲಿ, ಪ್ರಭಾವ, ಪೌರುಷ, ಬಲ,  ರೂಪ, ಕೀರ್ತಿ, ಬುದ್ಧಿ, ಆರೋಗ್ಯ : ಬರೀ ಇದೆ ಆರಾಧನೆಗೆ ಆರ್ಹತೆ ಅಲ್ಲ.

ಪ್ರತಿ ಕಾರ್ಯದಲ್ಲಿ ಜ್ಞಾನಯಜ್ಞ ಆಗಬೇಕು.

ಕೇಳಿ ಕೇಳಿ ತಿಳೀಬೇಕು. ಕೇಳುವುದೇ ಹೆದ್ದಾರಿ.

ನವ ವಿಧ ಭಕ್ತಿ:
ಶ್ರವಣ: ಕೇಳಬೇಕು
ಕೀರ್ತನ:  ಕೇಳಿದನ್ನು ಹೇಳಬೇಕು
ವಂದನೆ : ಅಕ್ರೊರ ಸ್ಯಮಂತಕ ಮಣಿ ಇಟ್ಟು ಕೊಳ್ಳಲು ಕೊಟ್ಟಿದ್ದು
ದಾಸ್ಯ: ದಾಸೋಹಂ ಕೌಸಲೆಂದ್ರಸ್ಯ
ಅರ್ಚನ : ಗೌರವ ಭಾವ. ಧೃತಿ
ಆತ್ಮ ನಿವೇದನ:
ಸಖ್ಯ : ನೇರವಾಗಿ ಸಿಗದ್ದು. ಸಜ್ಜರನ ಸಖ್ಯ
ಪಾದ ಸೇವೆ : ನೇರವಾಗಿ ಸಿಗದ್ದು. ಜ್ಞಾನಿಗಳ ಹಾಗೂ ಹಿರಿಯರ ಸೇವೆ

ಅರ್ಜುನ : ಪ್ರಯತ್ನದ ಪ್ರತಿನಿಧಿ

ಒಂದೇ ವಿಷಯದಲ್ಲಿ ನಿಲ್ಲಲು ವಿವಿಧ ಆಯಾಮಗಳಲ್ಲಿ ಕಾಣಬೇಕು.
ಮದ್ದಿಲ್ಲದ ಮದ ವಿದ್ಯೆಯ ಮದ.

ವೇದವ್ಯಾಸ ಮಹಾಭಾರತ ಬಗ್ಗೆ ಹೇಳ ಹೊರಟಾಗ ನೆನಪಿಸಿದ್ದು:
[೧] ಕುಂತಿಯ ಧೃತಿ (ಅದೆಷ್ಟೋ ಕಷ್ಟ ಪಟ್ಟರೂ ದೇವರಿಗೆ ಕೇಳಿ ಕೊಂಡಿದ್ದು ಕಷ್ಟ ಕೊಡು ಎಂದು)
[೨] ಗಾಂಧಾರಿಯ ಧರ್ಮಶೀಲತೆ
[೩] ವಿದುರನ ನಿಷ್ಠೆ

ಭಕ್ತರ ವಿಧಗಳು:
[೧] ದುಃಖದಲ್ಲಿ ಕೇಳುವವುನು
[೨] ಜಿಜ್ಞಾಸು : ಇದೇನು ಹೊಸದು ಎಂದು ತಿಳಿಯುವ ಆಸಕ್ತಿ
[೩] ಪ್ರಯೋಜನ : ತನಗೇನೋ ಬೇಕಾದಾಗ
[೪] ಜ್ಞಾನಿ : ದೇವರ ತಿಳಿದು ದೇವರನ್ನು ಭಕ್ತಿ ಮಾಡುವವ

Sunday, January 14, 2018

ಭಾಗವತದ ಸಾರ

ಶ್ರೀ ಸತ್ಯಾತ್ಮ ತೀರ್ಥರ ಶ್ರೀಮದ್ ಭಾಗವತ ಪ್ರವಚನ -  ೨೦೧೭ - ಮುಂಬೈ

ಸಾರಾಂಶ:
ಭಗವಂತನ ಸ್ಪಷ್ಟ ಜ್ಞಾನಕ್ಕಾಗಿ ಭಾಗವತದಲ್ಲಿ ಈ ಕೆಳಗಿನ ವಿಷಯ ತಿಳಿಸಿದ್ದಾರೆ.
[೧] ಸೃಷ್ಟಿ ಕ್ರಮ
[೨] ದುಷ್ಟರ ನಿಗ್ರಹ
[೩] ಶಿಷ್ಟರ ಪೋಷಣೆ
[೪] ಕರ್ಮಗಳ ಫಲ - ವಿವೇಕ
[೫] ಮನ್ವಂತರ - ಇಂದ್ರ, ಸಪ್ತ ಋಷಿ
[೬] ಭಗವಂತನ ರೂಪಗಳು
[೭] ಶಾಸ್ತ್ರಕ್ಕೆ ಅನುಗುಣವಾದ ಜೀವನ ಯೋಗ್ಯತೆಗೆ  ಸರಿಯಾದ ಶಿಕ್ಷಣದ ಕತೆಗಳು
[೮] ಪ್ರಳಯ
[೯] ಮೋಕ್ಷದ ಸ್ಪಷ್ಟ  ಕಲ್ಪನೆ - ಸ್ವರೂಪಾನಂದ ಭಾವವೇ ಮೋಕ್ಷ



ಭಾಗವತ(ಭಗವಂತ => ಬ್ರಹ್ಮ => ನಾರದ) ನಾಲ್ಕು ಭಾಗ ಮಾಡಿದರೆ. ಅವು ಕೆಳಗಿನವುಗಳು.
[೧] ಭಗವಂತ ಸದಾ ಸ್ವತಂತ್ರ ನಾವು ಸದಾ ಪರತಂತ್ರರು
[೨] ಭಗವಂತನಿಗೆ ಈ ಲೋಕದ ಅನಂತ ಜೀವ ಅಥವಾ ಜಡಗಳಿಂದ ಯಾವುದೇ ಪ್ರಯೋಜನವಿಲ್ಲ
[೩] ಭಗವಂತ ಒಳಗೆ ಹೊರಗೆ ಎಲ್ಲಡೆ ಇದ್ದಾನೆ
[೪] ಎಲ್ಲರೂ ಇರುವ ಕಾಲದಲ್ಲೂ ದೇವರಿದ್ದಾನೆ. ಯಾರು ಇಲ್ಲದ ಕಾಲದಲ್ಲೂ ದೇವರಿದ್ದಾನೆ
ಎಲ್ಲರೂ ಇರುವ ಸ್ಥಳದಲ್ಲೂ ದೇವರಿದ್ದಾನೆ. ಯಾರೂ ಇಲ್ಲದ ಸ್ಥಳದಲ್ಲೂ ದೇವರಿದ್ದಾನೆ
ಎಲ್ಲರಿಗೆ ಇರುವ ಶಕ್ತಿಯು ದೇವರಲ್ಲಿದೆ. ಯಾರಲ್ಲೂ ಇಲ್ಲದ ಶಕ್ತಿಯು ದೇವರಲ್ಲಿದೆ

ಎಲ್ಲ ದೇವರ ಸ್ತೋತ್ರ ಅಥವಾ ಜಪಗಳ ಸಂದರ್ಭದಲ್ಲಿ ಶ್ರೀ ಹರಿಯೇ ಇದೆಲ್ಲ ಶಬ್ದಗಳಿಂದ ಮುಖ್ಯ ವಾಚ್ಯ ಎಂಬ ಎಚ್ಚರಿಕೆ ಹಾಗೂ ಅನುಸಂಧಾನದಿಂದ ಮಾಡಿದಾಗ ಮಾತ್ರ ಆಯಾ ದೇವರು ನಮ್ಮನ್ನು ಅನುಗ್ರಹಿಸುವರು.

ನಾನು : ಇದು ಕೂಡ ದೇವರ ನಾಮ. ಸರ್ವಥಾ ಯಾರಿಗೆ ಯಾವಾಗಲೂ ಪ್ರೇರಕರೇ ಇಲ್ಲವೋ ಅವನು.
ಸಮೀರ : ಎಲ್ಲರಿಗೂ ಪ್ರೇರಕ. ಪ್ರಾಣ ದೇವರು

ಎಷ್ಟು ಅನಿವಾರ್ಯವೋ ಅಷ್ಟು ಮಾತಾಡಬೇಕು. ಪ್ರಾಣ ದೇವರು ಭಗವಂತನ ಮಹಿಮೆಯ ಬಗ್ಗೆ ಮಾತಾಡುತಿದ್ದರು.

ಕಾಮನೆಗಳ ಕಡಿಮೆ ಮಾಡಿಕೊಳ್ಳಬೇಕು. ಬಿಡಲಾಗದಿದ್ದಾರೆ ಭಗವಂತನ ಬೇಡಿ ಶರಣು ಹೋಗಬೇಕು. ಎಲ್ಲ ಇಷ್ಟಾರ್ಥಗಳನ್ನು ಕೊಡುವವ ಹಾಗೂ ಅನಿಷ್ಟಗಳನ್ನು ಕಳೆಯುತ್ತಾನೆ ಎಂಬ ದೃಡ ವಿಶ್ವಾಸದಿಂದ ಅವನನ್ನೇ ಭಜಿಸುವುದು ಅಂತರದೀಕ್ಷೆ.

ದೇವರ ಕಥೆ ಕೇಳದ ಕಿವಿಗಳು ಹೆಗ್ಗಣದ ಬಿಲ
ದೇವರ ಬಗ್ಗೆ ಮಾತಾಡದ ನಾಲಿಗೆ ಕಪ್ಪೆ ವಟಗುಟ್ಟಿದಂತೆ
ದೇವರಿಗೆ ಬಾಗದ ತಲೆ ದೊಡ್ಡ ಭಾರ
ದೇವರ ಪೂಜೆ ಮಾಡದ ಕೈ ಹೆಣದ ಕೈಯಂತೆ
ದೇವರ ಗುಡಿಗೆ ಹೋಗದ ಕಾಲುಗಳು ಕಟ್ಟಿಗೆಯ ಫಲಕದಂತೆ
ಸಾಮಗ್ರವನ್ನು ಭಗವಂತನಿಗೆ ಅರ್ಪಿಸಿದವನೆ ಧನ್ಯ

ಅನಾದಿ ಕಾಲದ ಅನಂತ ಕಾಲದವರೆಗೆ ಎಷ್ಟು ಉಪಯೋಗಿಸುದರೂ ಖಾಲಿಯಾಗದ ಸಂಪತ್ತು ಜೀವ ಸ್ವರೂಪದಲ್ಲಿ ತುಂಬಿದ್ದಾನೆ

ಅತ್ಯಂತ ಶ್ರೇಷ್ಟವಾದ ಸಂಪತ್ತು ತಪಸ್ಸು



Tuesday, January 2, 2018

ಸಂಧ್ಯಾವಂದನೆ - ವಿದ್ವಾನ್ || ಕೃಷ್ಣರಾಜ ಕುಟ್ಪಡಿ ಪ್ರವಚನ


ಸಂಧ್ಯಾವಂದನೆ - ಭಾಗ ೧
ಸಂಧ್ಯಾವಂದನೆ - ಭಾಗ ೨
ಸಂಧ್ಯಾವಂದನೆ - ಭಾಗ ೩
ಸಂಧ್ಯಾವಂದನೆ - ಭಾಗ 
ಸಂಧ್ಯಾವಂದನೆ - ಭಾಗ 
ಸಂಧ್ಯಾವಂದನೆ - ಭಾಗ 

ಸಾರಾಂಶ: ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಕೂಡಿದ ಆಧ್ಯಾತ್ಮಿಕ ಸಾಧನೆಗೆ ಪರಿಪೂರ್ಣವಾದ ದಾರಿ
ಕೃತಜ್ಞತೆ ಸಲ್ಲಿಸುವುದು ಅಥವಾ ಉಪಕಾರದ ಸ್ಮರಣೆ.  ತಿಳಿದು ಮಾಡಿದ ಜಾಣತನದಿಂದ ಸತ್ಫಲ ಬೇಗ ದೊರೆಯುತ್ತದೆ. ನಿತ್ಯ ಅನುಷ್ಟಾನ ಸಾವಿರಾರು ವರ್ಷಗಳ ಆಚರಿಸಿ ಸಂಸ್ಕರಿಸಿ ಸಿದ್ಧಿಯಾದ ಸಾಬೀತಾದ ಕ್ರಮ.

ಗಾಯತ್ರಿ: ಗಾಯನ್ತಮ್ ತ್ರಾಯತೆ - ಜಪಿಸಿದವರನ್ನು ರಕ್ಷಿಸುವ

ಪುಂಡರೀಕಾಕ್ಷ : ಪುಂಡರೀಕ ಅಕ್ಷ - ಕಮಲದಂತಹ ಕಣ್ಣು - ಕಮಲ ಕೆಸರಲ್ಲಿ ಬೆಳೆದರೂ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲ. ಕಣ್ಣನ್ನು ಎಂದು ಸ್ವಚ್ಛಗೊಳಿಸುವ ಅವಶ್ಯಕತೆ ಇಲ್ಲ. ಭಗವಂತ ಶುದ್ಧ ಎಂದು ನೆನೆಪಿಸಿಕೊಂಡಾಗ ನಮ್ಮ ದೋಷ ಕಳೆದುಕೊಳ್ಳುತ್ತೇವೆ

ನೆಲದಲ್ಲಿ ಗುರುತ್ವಾಕರ್ಷಣ ಶಕ್ತಿ ಕೆಳಕ್ಕೆ ಎಳೆಯುತ್ತೆ. ರೇಷ್ಮೆ, ಅಜಿನ ಹಾಗೂ ದರ್ಭೆ ಆ ಕೆಳಕ್ಕೆ ಎಳೆಯುವ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತದೆ.

ತಾಮ್ರ, ಭಂಗಾರ ಅಥವಾ ಹಿತ್ತಾಳೆಯ ಪಾತ್ರೆ ಉಪಯೋಗಿಸುವುದು ಉತ್ತಮ. ಬೆಳ್ಳಿ ದೇವ ಕಾರ್ಯಕ್ಕೆ ಉಪಿಯೋಗಿಸುವುದು ಒಳ್ಳೆಯದಲ್ಲ.

ಕೇಶವ: ಸೂರ್ಯನ ಕಿರಣಗಳೆಂಬ ಕೂದಲು

ಅಹಂ ಭಾವವೇ ಕಲಿ.

ಮನಸ್ಸು ಒಂದೇ ವಿಷಯದಲ್ಲಿ ಏಕಾಗ್ರವಾಗಿ ಕೂಡಿಸುವುದೇ ಕುಂಡಲಿನೀ ಶಕ್ತಿ

ಚಕ್ರ: ಧರ್ಮ ಚಕ್ರ. ಅಜ್ಞಾನ ಕಳೆಯಲು
ಶಂಖ: ಜ್ಞಾನ ಸಿಗಲು ಹಾಗೂ ಪಾಪ ಕಳೆಯಲು
ಗಧೆ : ದುಷ್ಟ ಕಾಮನೆಗಳ ನಿಗ್ರಹ
ಪದ್ಮ: ಕೊಳೆಯನ್ನು ತಗೆದು ಶುದ್ಧವಾಗಿಸಲು
ನಾರಾಯಣ : ರಕ್ಷಣೆ

ಅಕ್ಷತೆ: ತುಂಡಾಗದ ಅಕ್ಕಿ. ಕೈಯ ಪ್ರಾಣ ಶಕ್ತಿಯ ಪ್ರಭಾವವನ್ನು ನಮಗೆ ತಂದು ಕೊಡುತ್ತದೆ

೨೪ ನಾಮಗಳ ಅರ್ಥ:
ನಾರಾಯಣ : ದೋಷರಹಿತ
ಮಾಧವ :  ಮಾ - ಲಕ್ಷ್ಮಿ ದೇವಿ ಧವ - ಗಂಡ - ಲಕ್ಷಿ ನಾರಾಯಣ
ಗೋವಿಂದ : ಗೋವು, ವೇದ ಹಾಗೂ ನಂಬಿದವರನ್ನು ರಕ್ಷಿಸುವವನು. ವೇದದಿಂದ ತಿಳಿಯತಕ್ಕವನು
ವಿಷ್ಣು : ಪ್ರತಿ ವಸ್ತುವಿನಲ್ಲೂ ಪ್ರವೇಶಿಸುವವ. ಸಂಸಾರ ಎಂಬ ವಿಷ ಕಳೆಯುವವ
ಹೃಷಿಕೇಶ: ಭಗವಂತನ ಸ್ಮರಣೆಯಿಂದ ರೋಮ ನಿಮಿರುವಂತ ಸಂತೋಷ ಕೊಡುವವ
ಪದ್ಮನಾಭ: ಹೊಕ್ಕಳಿಂದ ಬ್ರಹ್ಮಾಂಡ ಸೃಷ್ಟಿಸಿದವ
ದಾಮೋದರ: ಹೊಟ್ಟೆಗೆ ತಾಯಿಯಿಂದ ಹಗ್ಗ ಕಟ್ಟಿಸಿಕೊಂಡವ
ಸಂಕರ್ಷಣ: ಎಲ್ಲವನ್ನು ಚೆನ್ನಾಗಿ ತನ್ನೆಡೆ ಎಳೆದುಕೊಳ್ಳುವವ
ಮಧುಸೂಧನ :
ತ್ರಿವಿಕ್ರಮ:
ವಾಮನ :
ಶ್ರೀಧರ:
ವಾಸುದೇವ: ಯಾರಿಗೆ ನಂಬಿಕೆ ಇದೆಯೋ ಅವರಿಗೆ ನಂಬಿಕೆ ಹುಟ್ಟಿಸುವ ಯಾರಿಗೆ ನಂಬಿಕೆ ಇಲ್ಲವೋ ಅವರಿಗೆ ನಂಬಿಕೆ ಕಳೆಯುವ
ಪ್ರದ್ಯುಮ್ನ: ಹೃದಯದಲ್ಲಿ ಹೊಳೆಯುವ
ಅನಿರುದ್ಧ: ಯಾರನ್ನೂ ತಡೆಯಲು ಸಾಧ್ಯವಿಲ್ಲ
ಪುರುಷೋತ್ತಮ:  ಸಾಧಕ ಜೀವರಲ್ಲೇ ಸರ್ವೋತ್ತಮ
ಅಧೋಕ್ಷಜ: ಮುಚ್ಚಿದ ಕಣ್ಣಿಗೆ ಕಾಣುವವ
ನರಸಿಂಹ: ನರ (ಬುದ್ಧಿ) + ಸಿಂಹ (ಪ್ರಾಮಾಣಿಕತೆ)
ಅಚ್ಯುತ: ಚ್ಯುತಿ ಇಲ್ಲದವ
ಜನಾರ್ಧನ: ಜನನ ನಾಶ
ಉಪೇಂದ್ರ: ಇಂದ್ರನ(ಚಟುವಟಿಕೆ ಕಾರಣ) ಹತ್ತಿರ ಇರುವವ
ಹರಿ: ಪಾಪಗಳನ್ನು ಪರಿಹರಿಸುತ್ತಾನೆ
ಕೃಷ್ಣ: ಜೀವನ ಕೃಷಿಕ.  ಜೀವನವೆಂಬ ಭೂಮಿಯನ್ನು ಚೆನ್ನಾಗಿ ಉಟ್ಟು ಕರ್ಮ ಫಲವನ್ನು ಕೊಡುವ ಕೃಷಿಕ

ಅಚ್ಯುತ, ಅನಂತ, ಗೋವಿಂದ: ನಾಮದ ಅರ್ಥ
ಅಚ್ಯುತ: ಚ್ಯುತಿ ಇಲ್ಲದವ
ಅನಂತ : ಸಾಮಥ್ಯ೯ ಕಾಲ ಮತ್ತು ದೇಶದ ಮಿತಿ ಇಲ್ಲದವನುಅದಕ್ಕೆ ಅವನು ಅಚ್ಯುತ.
ಗೋವಿಂದ : ಗೋವು, ವೇದ ಹಾಗೂ ನಂಬಿದವರನ್ನು ರಕ್ಷಿಸುವವನು. ವೇದದಿಂದ ತಿಳಿಯತಕ್ಕವನು

ಒಟ್ಟು ಉಸಿರಾಟದ ಸಂಖ್ಯೆ ೭೭ ಕೋಟಿ ೭೮ ಲಕ್ಷ್ಯ. ಒಂದು ಉಸಿರಿಗೆ ೪ಸೆ.

ಜ್ಞಾನ ಮುದ್ರೆಯ ಮಹತ್ವ: ಯಾವುದೇ ಕಾರ್ಯದಲ್ಲಿ ಕೈ ಉಪಯೋಗಿಸದೆ ಇದ್ದಾಗ ಜ್ಞಾನ ಮುದ್ರೆ ಮಾಡುವುದು ಉತ್ತಮ

ಜಪ ಸಿದ್ಧಿಯಾಗಬೇಕು ಎಂದರೆ:
[೧] ಸಂತೋಷದ ಮನಸ್ಸಿನಿಂದ ಕೂಡಿರಬೇಕು
[೨] ಶುಚಿಯಾದ ಬಟ್ಟೆ, ಆಸನ ಹೊಂದಿರಬೇಕು
[೩] ಮೌನ: ನಿಜವಾದ ಅರ್ಥ ಮನನ. ಬೇರೆ ವಿಷಯ ಯೋಚಿಸದೇ.  ಇಡೀ ಮಂತ್ರದ ಅರ್ಥ ಒಟ್ಟು ತಾತ್ಪರ್ಯ. ಈ ಮಂತ್ರದಲ್ಲಿ ಏನು ಚಿಂತಿಸುತಿದ್ದೇನೆ ಎಂಬುದರ ಮೇಲೆ ಗಮನ
[೪] ಸಮಾಧಾನದಿಂದ ಹಾಗೂ ಆಲಸ್ಯವನ್ನು ತೊರೆದು ಉತ್ಸಾಹದಿಂದ ಕೂಡಿರಬೇಕು

ಅರ್ಘ್ ಕೊಡುವಾಗ ಹೆಬ್ಬೆರಳು ತರ್ಜನೆ ಬೆರಳಿಗೆ ಸ್ಪರ್ಶಿಸದೆ ಇರುವುದು ನಾನು ಮಾಡುತ್ತೇನೆ ಎಂಬ ಭಾವನೆಯ ತ್ಯಾಗ
ಮಂದೇಹ ಉದಾಸೀನ ಎಂಬ ರಾಕ್ಷಸರನ್ನು ಓಡಿಸುವುದು. ಕಾಲಕ್ಕೆ ಸರಿಯಾಗಿ ಮಾಡಲು ಬಿಡದ ರಾಕ್ಷಸರು
ಧನಾತ್ಮಕ ಶಕ್ತಿ ಇರುವವರೆಗೆ ಋಣಾತ್ಮಕ ಶಕ್ತಿ ಇದ್ದದ್ದೇ
ಅಶುಚಿ ಇದ್ದಾಗಲೂ ಕೂಡ ಸರಿಯಾದ ಸಮಯದಲ್ಲಿ ಮಾಡಲೇಬೇಕು

ಓಂ (ಆ + ಉ + ಮ) => ವ್ಯಾಹೃತಿ => ಗಾಯತ್ರಿ => ಪುರುಷಸೂಕ್ತ => ಸಮಗ್ರ ವೇದಗಳು
ಗಾಯತ್ರಿ ಮಂತ್ರದಲ್ಲಿ ಸಕಲ ವೇದಗಳ ಅರ್ಥವನ್ನು ಕಂಡುಕೊಳ್ಳಬಹುದು

ಆ : ನಾವು ತಿಳಿಯಲಾಗದ್ದು
ಉ : ನಾವು ತಿಳಿದದ್ದೆಲ್ಲಕಿಂತಲೂ ಎತ್ತರದಲ್ಲಿ ಇರುವುದು
ಮ: ನಾವು ತಿಳಿದದ್ದು ಯಾವುದು ಅಲ್ಲ ಎಂದು ತಿಳಿದುಕೊಳ್ಳಬೇಕು

ಭೂರ್ಭೂವ ಸ್ವಃ : ಪೂರ್ಣ, ಸುಖವನ್ನು ನೀಡುವವ, ಎಲ್ಲಕಿಂತ ಹೆಚ್ಚು ಬೆಳೆಯುವವ
ಯಾರು ನಮ್ಮ ಬುದ್ಧ್ಹಿಯನ್ನು ಪ್ರೇರೇಪಿಸುತ್ತಾರೋ
ಯಾರು ಸೃಷ್ಟಿಯ ಆದಿಯಿಂದ ಇಲ್ಲಿಯವರೆಗೂ ವ್ಯಾಪಿಸಿಕೊಂಡು ನಿಂತು
ಸ್ತೋತ್ರ ಮಾಡಲಿಕ್ಕೆ ಯೋಗ್ಯರಾದರವರಲ್ಲಿ ಎಲ್ಲಕಿಂತ ಉತ್ತಮನಾದ ಎಲ್ಲ ಕಡೆ ಇರುವ

ಎಲ್ಲ ಮಂತ್ರಗಳ ರಾಜ ಓಂಕಾರ

ವ್ಯಾಹೃತಿಯ ಅರ್ಥ:

ಭೂ : ಪೂರ್ಣ  (ಸ್ಪೂರ್ತಿ ಕೊಡುತ್ತದೆ) (ವರಾಹ)
ಭೂವಃ : ಯಾರು ಯಾರು ಎತ್ತರಕ್ಕೆ ಏರುವರಿದ್ದರೋ ಅವರೆಲ್ಲರಿಗಿಂತಲೂ ಎತ್ತರದಲ್ಲಿ ಇರುವವನು (ಹಿಡಿದ ಕೆಲಸವನ್ನು ಮುಗಿಸುವ ತಾಕತ್ತು ಬರುತ್ತೆ)
ಸ್ವ : ಅನಂತ ಸುಖ. ಜ್ಞಾನ ಮತ್ತು ಆನಂದವನ್ನು ಚೆನ್ನಾಗಿ ಹೊಂದಿದವ ಭಗವಂತ. ಸುಬಲ (ನಮ್ಮ ಯೋಗ್ಯತೆಗೆ ಅನುಗುಣವಾದ ಬಲ ದೊರಕುತ್ತೆ)

ಗಾಯತ್ರಿ ಹತ್ತು ಶಬ್ದಗಳು
ಎಂಟು ಮಹಾ ಮಂತ್ರಗಳು
ತರ್ಪಣ : ಋಣ ಅಥವಾ ಕೃತಜ್ಞತೆ ಸಲ್ಲಿಸಿ ದೇವರನ್ನು ಸಂತುಷ್ಟಿಗೊಳಿಸುವುದು


ತತ್ - ಪರಶುರಾಮ ಚಿಂತಿಸಬೇಕು
ವರೇಣ್ಯಂ : ಬಿಡಿಸಿ ಕೊಂಡು ಜಪಿಸಿಬೇಕು
ಪಂಚ ಅವಸಾನ : ಮಂತ್ರಾರ್ಥ ಚಿಂತನೆಗೆ ಐದು ಸಲ ನಿಲ್ಲಿಸಬೇಕು

ಚಕ್ರ ಅಜ್ಞಾನ ಹೋಗಲು. ಶಂಖ ಜ್ಞಾನ ದೊರೆಯಲು

ಪ್ರತಿ ೧೦ ಜಪಕ್ಕೆ ಒಂದು ಅರ್ಘ್


ಗಾಯತ್ರಿಯಲ್ಲಿ ದಶಾವತಾರ ಚಿಂತನೆ:
ಮತ್ಸ್ಯ : ವ್ಯಾಪಿಸುವುದು
ಕೂರ್ಮ : ಹೊರಗೆ ಹಾಕುವುದು
ವರಾಹ : ಶ್ರೇಷ್ಟ
ನರಸಿಂಹ : ಎಲ್ಲ ದಿಕ್ಕುಗಳನ್ನು ವ್ಯಾಪಿಸಬಲ್ಲ ಹಾಗೂ ಕ್ಷಣ ಮಾತ್ರದಲ್ಲಿ ಎಲ್ಲಿ ಬೇಕೋ ಅಲ್ಲಿ ಹೋಗಬಲ್ಲ
ವಾಮನ: ದೇವರ ಲೋಕದಲ್ಲಿ ಬೆಳೆದ ರೂಪ
ಪರಶುರಾಮ : ಭೂಮಿಯನ್ನು ರಕ್ಷಿಸಿದ ರೂಪ
ರಾಮ: ಲೋಕದಲ್ಲಿ ಹೇಗಿರಬೇಕೆಂಬ ಬುದ್ಧಿವಾದ ಮಾಡಿದ ರೂಪ
ಕೃಷ್ಣ : ಗೀತೆಯ ಉಪದೇಶದ ಮೂಲಕ ಎಲ್ಲವನ್ನು ತಿಳಿಸಿದ ರೂಪ
ಬುದ್ಧ: ನೀವು ತಿಳಿದದ್ದರ ಆಚೆ ಇದ್ದದ್ದು ದೇವರು ಎಂದು ತಿಳಿಸಿದ್ದು
ಕಲ್ಕಿ: ಕಲಿತನ ನಾಶ ಮಾಡಿ ಕೃತಯುಗ ಪ್ರಾರಂಭಕ್ಕೆ ಪ್ರಚೋದನೆ ನೀಡುವ ರೂಪ