ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ
ವಿದುರ - ವಿದ್ದೆಯಲ್ಲಿ ಸದಾ ರತ
ಮಹಾಭಾರತದಲ್ಲಿ ವಿದುರನ ಜ್ಞಾನ ನೋಡು
ನಿದ್ದೆ ಬರದಿರುವದಕ್ಕೆ ಕಾರಣಗಳು:
[೧] ನಮಗಿಂತ ಬಲಿಷ್ಟ ನಮ್ಮೆ ಮೇಲೆ ಸವಾರಿ ಮಾಡಿದಾಗ
[೨] ಸರ್ವಸ್ವ ಕಳೆದುಕೊಂಡು ಬೀದಿಗೆ ಬಿದ್ದವನಿಗೆ
[೩] ಕಾಮಿಗೆ
[೪] ಕಳ್ಳ
[೫] ಬೇರೆಯವರ ಸ್ವತ್ತನ್ನು ಒಳಗೆ ಹಾಕಬೇಕು ಎಂಬ ಯೋಚನೆ
ದೇಶವನ್ನು ಆಳುವ ಒಳ್ಳೆಯ ಆಡಳಿತ ಕೊಡಲು ಮಾಡಬೇಕಾದ್ದು:
ಒಂದು ಇರಬೇಕು. ಒಂದರಿಂದ ಎರಡನ್ನು ತೀರ್ಮಾನ ಮಾಡಬೇಕು
ಮೂರನ್ನು ನಾಲ್ಕರಿಂದ ಸ್ವಾಧೀನ ಪಡಿಸಿಕೊಳ್ಳಬೇಕು
ಐದನ್ನು ಗೆಲ್ಲು
ಆರು ಸಂಗತಿ ತಿಳಿ
ಏಳು ಚಟ ಬಿಡು
ಒಂದು: ನಿಷ್ಪಕ್ಷಪಾತಿ - ಸೂಕ್ಷ್ಮ ವಿವೇಕ / - ನ್ಯಾಯ ಪೀಠದಲ್ಲಿ ಕುಳಿತವ
ಎರಡು: ಪ್ರಾಮಾಣಿಕವಾಗಿ ಅಪರಾಧಿ ನಿರಪರಾಧಿ ಹಾಗೂ ನಿರಪರಾಧಿ ಅಪರಾಧಿ ಆಗದಂತೆ ಎಚ್ಚರ ವಹಿಸು
ಮೂರು: ಒಳ್ಳೆಯವರು, ತಟಸ್ಥರು, ಕೆಟ್ಟವರು/ ಸಾತ್ವಿಕ, ರಾಜಸ, ತಾಮಸ
ನಾಲ್ಕು: ಸಾಮ, ದಾನ, ಬೇಧ, ದಂಡ/ ಋಗ್ವೇದ, ಯಜುರ್ವೇದ, ಅಥರ್ವಣವೇದ, ಸಾಮವೇದ
ಐದು : ಪಂಚೇಂದ್ರಿಯ(ಜ್ಞಾನೇಂದ್ರಿಯ, ಕರ್ಮೇಂದ್ರಿಯ) - ನಿನ್ನನ್ನು ನೀನು ಗೆಲ್ಲು
ಆರು:
ಏಳು: ಸ್ತ್ರೀ (ಕಾಮಾಂಧ) , ಜೂಜಾಟ, ಬೇಟೆ (ರಕ್ತ ಪಿಪಾಸು), ಕುಡಿಯುವುದು (ಸುರಪಾನ), ಅಧಿಕಾರ ಮದದಿಂದ ಇನ್ನೊಬ್ಬರನ್ನು ಸಸಾರ ಅಥವಾ ಅವಮಾನ ಮಾಡಿ ಮಾತಾಡದಿರು (ಮಾತಿನಲ್ಲಿ ಕ್ರೌರ್ಯ ಅಥವಾ ದುರುಪಯೋಗ) , ಅಧಿಕಾರದ ದುರುಪಯೋಗ (ನಮಗಾಗದವರ ಮೇಲೆ ಸೇಡು ತೀರಿಸಿಕೊಳ್ಳುವುದು), ದುಡ್ಡಿನ ದುರುಪಯೋಗ ಅಥವಾ ದುಂದು ವೆಚ್ಚ
===
ಅಧ್ಯಕ್ಷನಾಗಿ ಭಗವಂತ ಇರುವದರಿಂದ ನಡೆಯುತ್ತದೆ. ಅಧಿಯಜ್ಞ.
ಅಧಿಭೂತ, ಆಧ್ಯಾತ್ಮ, ಅಧಿದೈವ, ಅಧಿಯಜ್ಞ.
ನಿರಹಂಕಾರ ಬರಲು ತಿಳಿಯಬೇಕಾದ್ದು ಆರು:
[೧] ಪ್ರಪಂಚದ ಅರಿವು
[೨] ಪ್ರಪಂಚದಲ್ಲಿ ಚೈತನ್ಯ ಅಥವಾ ಆತ್ಮದ ಅರಿವು
[೩] ಚೈತನ್ಯವನ್ನು ನಿಯತ್ರಿಸಲು ನೂರಾರು ದೇವತಾ ಶಕ್ತಿಗಳು ಅರಿವು
[೪] ನೂರಾರು ದೇವತೆಗಳನ್ನು ಹಾಗೂ ಚೈತನ್ಯವನ್ನು ನಿಯಂತ್ರಿಸುವ ಪರಮಾತ್ಮನ ಅರಿವು
[೫] ಪರಮಾತ್ಮ ಎಲ್ಲಡೆ ವ್ಯಾಪಿಸಿದ್ದಾನೆ ಎಂಬ ಸರ್ವಗತತ್ವದ ಅರಿವು
[೬] ಸರ್ವವೂ ಅವನಿಂದ ಆಗ್ತಾ ಇದೆ ಎಂಬ ಕರ್ಮದ ಅರಿವು
ಕ್ಷಮೆ ದುರ್ಬಲನಿಗೆ ಗುಣ ಹಾಗೂ ಸಬಲನಿಗೆ ಅಲಂಕಾರ.
ಒಳ್ಳೆಯ ಕೆಲಸಕ್ಕೆ ದುಡ್ಡು ಕೊಡದ ಧನವಂತ, ಬಡವನಾಗಿ ಕೂಡ ಬದುಕು ತಿಳಿಯದವನನ್ನು ಕಲ್ಲು ಕಟ್ಟಿ ಭಾವಿಗೆ ತಳ್ಳು.
ಕಾಮ(ಅಸಂತೃಪ್ತಿ), ಕ್ರೋಧ, ಲೋಭ ನರಕಕ್ಕೆ ದಾರಿ. ಬೇಕು ಹೆಚ್ಚಾದಾಗ ಸಿಗದೆ ಇರುವ ಸಂಭವನೀಯತೆ ಹೆಚ್ಚುತ್ತೆ. ಕಾಮದ ಮರಿ ಕ್ರೋಧ. ದುರಾಸೆ ಹೆಚ್ಚು ಇದ್ದವನಿಗೆ ಕೋಪ ಹೆಚ್ಚು. ಕೋಪ ಅನಪೇಕ್ಷಿತ ವಸ್ತು. ಕೋಪಿಷ್ಟರಿಂದ ಚಿತ್ರಹಿಂಸೆ. ಬಯಕೆ ಈಡೇರಿದರೆ ಲೋಭ. ಇನ್ನೊಬ್ಬರಿಗೆ ಸಿಗಬಾರದು. ಎಲ್ಲ ನನಗೆ ಸಿಗಬೇಕು.